ಶಾಂತಾಬಾಯಿ ಧನಾಜಿ ದಾಣಿ (೧೯೧೯-೨೦೦೧) ಒಬ್ಬ ಭಾರತೀಯ ದಲಿತ ಲೇಖಕಿ, ರಾಜಕಾರಣಿ ಮತ್ತು ಸಮಾಜ ಸೇವಕಿ. ಅವರು ಮರಾಠಿ ಭಾಷೆಯಲ್ಲಿ ಬರೆಯುತ್ತಾರೆ. == ಜೀವನ ಮತ್ತು ವೃತ್ತಿ == ದಾಣಿ ೧೯೧೯ ರಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬಡ ಪರಿಸ್ಥಿತಿಯಲ್ಲಿ ಜನಿಸಿದರು. ಅವರ ತಾಯಿಯ ಹಿಂದಿನ ಮದುವೆಯಿಂದ ಮೂವರು ಮಕ್ಕಳು ಸೇರಿದಂತೆ ಹಲವಾರು ಸಹೋದರರು ಮತ್ತು ಸಹೋದರಿಯರನ್ನು ಹೊಂದಿದ್ದರು. ಅವರ ತಂದೆ ಹಾಲು ವ್ಯಾಪಾರ ಮಾಡುತ್ತಿದ್ದರು. ತಾಯಿ ಮತ್ತು ಅಕ್ಕ ರಾಧಾಬಾಯಿ ಅವರ ಒತ್ತಾಯದ ಮೇರೆಗೆ ದಾಣಿ ವಿದ್ಯಾಭ್ಯಾಸ ಮಾಡಿದರು. ಅವರು ನಾಸಿಕ್‌ನ ಮಿಷನ್ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು, ಗುಜರಾತ್‌ನ ಪ್ರೌಢಶಾಲೆಯಲ್ಲಿ ಮುಂದುವರೆದರು ಮತ್ತು ಪುಣೆಯ ಮಹಿಳಾ ತರಬೇತಿ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದರು. ದಾಣಿಯವರ ಆತ್ಮಚರಿತ್ರೆಗಳು ಬಡತನ ಮತ್ತು ಹಸಿವನ್ನು ದಾಖಲಿಸುತ್ತವೆ ಮತ್ತು ಸ್ಥಳೀಯ ಹಿಂದೂ ಜನಸಂಖ್ಯೆಯಿಂದ ಅವರ ಕುಟುಂಬದ ವಿರುದ್ಧ ಆಚರಣೆಗಳನ್ನು ವಿವರಿಸುತ್ತದೆ. ಬ್ಯಾಚುಲರ್ ಆಫ್ ಆರ್ಟ್ಸ್‌ಓದುತ್ತಿರುವಾಗ, ದಾಣಿ ಅವರು ತಮ್ಮ ಸೋದರ ಸಂಬಂಧಿಯ ಪತಿಯ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿಯನ್ನು ಸೇರಿಕೊಂಡರು. ಶಾಸಕಾಂಗ ಸಭೆಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯಕ್ಕಾಗಿ ಕರೆ ನೀಡಿದರು ಮತ್ತು ಇದಕ್ಕಾಗಿ ಜೈಲಿನಲಿದ್ದರು. ೧೯೪೨ ರಲ್ಲಿ, ದಾಣಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಉಪನ್ಯಾಸದಲ್ಲಿ ಭಾಗವಹಿಸಿದರು ಮತ್ತು ನಂತರ ಅವರನ್ನು ಭೇಟಿಮಾಡಿದರು, ಭಾರತದಲ್ಲಿ ಜಾತಿ ತಾರತಮ್ಯವನ್ನು ಕೊನೆಗೊಳಿಸುವ ಕ್ರಿಯಾಶೀಲತೆಯನ್ನು ಬೆಂಬಲಿಸಿದರು. ನಂತರ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಧ್ಯಕ್ಷೆಯಾದರು. ೧೯೪೬ ರಲ್ಲಿ, ದಾಣಿ ಪೂನಾ ಒಪ್ಪಂದದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು ಮತ್ತು ಕಪ್ಪು ಬಾವುಟಗಳನ್ನು ಹಿಡಿದು ಪುಣೆ ಅಸೆಂಬ್ಲಿ ಹಾಲ್‌ಗೆ ಪ್ರವೇಶಿಸಿದ ಪ್ರತಿಭಟನಾಕಾರನ್ನು ನಂತರ ಬಂಧಿಸಲಾಯಿತು. ಅವರನ್ನು ಯರವಾಡು ಜೈಲಿನಲ್ಲಿ ಬಂಧಿಸಲಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿದರು. ೧೯೬೮ ಮತ್ತು ೧೮೭೪ ರ ನಡುವೆ ಮಹಾರಾಷ್ತ್ರ ವಿದಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಅವರು ತರುವಾಯ ಮಹಾರಾಷ್ಟ್ರದಲ್ಲಿ ಭೂರಹಿತ ಕಾರ್ಮಿಕರ ದಾಖಲಾತಿಗಾಗಿ ಮತ್ತು ಶಿಕ್ಷಣದ ಪ್ರವೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು, ಬಾಬಾ ಸಾಹೆಬ್ ಗಾಯಕವಾಡರಿಂದ ಸ್ಥಾಪಿಸಲ್ಪಟ ರಮಾಬಾಯಿ ಅಂಬೇಡ್ಕರ್ ಆಸ್ಪತ್ರೆ ಮತ್ತು ಮಹಾರಾಷ್ಟ್ರದ ನಾಸಿಕ್‌ನಲ್ಲಿ ದಲಿತ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾದ ಹಲವಾರು ಪ್ರಾಥಮಿಕ ಶಾಲೆಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಯಶವಂತರಾವ್ ಮಹಾರಾಷ್ಟ್ರ ವಿಶ್ವವಿದ್ಯಾನಿಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ೧೯೮೭ ರಲ್ಲಿ, ದಾಣಿ ಶಿಕ್ಷಣಕ್ಕೆ ನೀಡಿದ ಕೊಡುಗೆಗಳಿಗಾಗಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರು ಮಹಾರಾಷ್ಟ್ರ ಸರ್ಕಾರದಿಂದ ಇದೇ ರೀತಿಯ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು, ಬದಲಿಗೆ ದಲಿತರಿಗೆ ಸೌಕರ್ಯಗಳನ್ನು ಸುಧಾರಿಸಲು ಸರ್ಕಾರದ ಪ್ರಶಸ್ತಿ ನಿಧಿಯನ್ನು ಬಳಸಬೇಕೆಂದು ಹೇಳಿಕೆ ನೀಡಿದರು. ದಾಣಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಇತರ ಹಲವಾರು ದಲಿತ ನಾಯಕರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ದಾಣಿ ರಾತ್ರದಿನ್ ಅಮ್ಹಾ (. ಫಾರ್ ಅಸ್, ದೀಸ್ ನೈಟ್ಸ್ ಅಂಡ್ ಡೇಸ್ ) ಎಂಬ ಆತ್ಮಚರಿತ್ರೆಯನ್ನು ಪ್ರಕಟಿಸಿದರು. ಈ ಪುಸ್ತಕವನ್ನು ದಾಣಿ ಅವರು ನಿರೂಪಿಸಿದ್ದಾರೆ ಮತ್ತು ಅವರ ಸ್ನೇಹಿತೆ ಭಾವನಾ ಭಾರ್ಗವೆ ಅವರು ರೆಕಾರ್ಡ್ ಮಾಡಿದ್ದಾರೆ. ಪುಸ್ತಕದ ಶೀರ್ಷಿಕೆಯನ್ನು ಸಂತ ತುಕಾರಾಂ ಅವರು ಬರೆದ ಗೀತೆಯಿಂದ ತೆಗೆದುಕೊಳ್ಳಲಾಗಿದೆ, ಇದು ದಲಿತ ಸಮುದಾಯಗಳು ಎದುರಿಸುತ್ತಿರುವ ಹೋರಾಟಗಳನ್ನು ದಾಖಲಿಸುತ್ತದೆ. ಅವರ ಆತ್ಮಚರಿತ್ರೆಯನ್ನು ಮಹತ್ವದ ಕೊಡುಗೆ ಎಂದು ಪರಿಗಣಿಸಲಾಗಿದೆ. == ಮೂಲಗಳು == , (1990). : . . :10603/307838. , (2014). / : ' . : . 9789383074679. == ಉಲ್ಲೇಖಗಳು ==